ಅಚ್ಚು ಮೂವೀಸ್ ಲಾಂಛನದಲ್ಲಿ ಕೃಷ್ಣಮೂರ್ತಿ ಹಾಗೂ ನವೀನ್ಕುಮಾರ್ ನಿರ್ಮಿಸಿರುವ ‘ಜೊತೆಯಾಗಿ ಹಿತವಾಗಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ವಿಭಿನ್ನ ಕಥಾಹಂದರವುಳ್ಳ ಈ ಚಿತ್ರವನ್ನು ಎಸ್.ಕೆ.ಶ್ರೀನಿವಾಸ್ ನಿರ್ದೇಶಿಸಿದ್ದಾರೆ. ಸ.ಹರೀಶ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಡ್ರಮರ್ ದೇವಾ ಸಂಗೀತ, ವಿನೋದ್ಭಾರತಿ ಛಾಯಗ್ರಹಣ, ಆರ್.ಡಿ.ರವಿ ಸಂಕಲನ, ಹೊಸ್ಮನೆ ಮೂರ್ತ್ ಕಲಾ ನಿರ್ದೇಶನ ಹಾಗೂ ಕಪಾಲಿ ರವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಚಂದನ್, ತೇಜಸ್ವಿನಿ, ನವೀನ್, ತಾರಾ, ನೀನಾಸಂ ಅಶ್ವತ್, ಶಂಕರ್ ಅಶ್ವತ್, ರಾಮಕೃಷ್ಣ, ಜೈಜಗದೀಶ್, ಅಭಿನಯಶ್ರೀ, ಶೃಂಗೇರಿ ರಾಮಣ್ಣ ಮುಂತಾದವರಿದ್ದಾರೆ.